ಪೋಸ್ಟ್‌ಗಳು

ಕಾರ್ಗಿಲ್ ಕದನವೀರರು - 9

ಇಮೇಜ್
ಮದುವೆಯಾಗಿ ಇನ್ನೂ ಹತ್ತು ತಿಂಗಳು ಕೂಡ ಕಳೆದಿರಲಿಲ್ಲ. ಇಂತಹ ಸಂದರ್ಭದಲ್ಲಿ ಮೆಚ್ಚಿನ ಮಡದಿಯಿಂದ ಪತ್ರವೊಂದು ಬಂದರೆ ಅದನ್ನು ತತ್ ಕ್ಷಣ ತೆರೆದೋದಬೇಕೆಂಬ ಕಾತರ ಯಾರಿಗೆ ತಾನೇ ಇರುವುದಿಲ್ಲ? 29ರ ಹರೆಯದ ಮೇಜರ್ ರಾಜೇಶ್ ಅಧಿಕಾರಿಗೆ ಆತನ ಮಡದಿ ಕಿರಣ್ ಬರೆದ ಕಾಗದ ತಲುಪಿದಾಗ ಆತ ಹದಿನಾರು ಸಾವಿರ ಅಡಿ ಎತ್ತರದ ಹಿಮವತ್ಪರ್ವತದ ತಪ್ಪಲಿನಲ್ಲಿದ್ದ. ಒಂದು ಕೈಯಲ್ಲಿ ಭೂಪಟ ಇನ್ನೊಂದರಲ್ಲಿ ಎ.ಕೆ -47 ರೈಫಲ್. ತೊಲೊಲಿಂಗ್ ಪರ್ವತದೆತ್ತರದಲ್ಲಿ ಪಾಕ್ ಅತಿಕ್ರಮಣಕಾರರು ಕಟ್ಟಿಕೊಂಡಿದ್ದ ಬಂಕರ್ ಧ್ವಂಸ ಮಾಡುವುದು ರಾಜೇಶ್ ಅಧಿಕಾರಿಯ ಗುರಿಯಾಗಿತ್ತು. "ಅರೆ, ಈಗ ಪುರುಸೊತ್ತಿಲ್ಲ ನಾಳೆ ಕಾರ್ಯಾಚರಣೆ ಮುಗಿದ ಬಳಿಕ ಇದನ್ನು ಆರಾಮವಾಗಿ ಓದೋಣ" ಎಂದು ಹೆಂಡತಿಯ ಕಾಗದವನ್ನು ಮಡಿಚಿ ಭದ್ರವಾಗಿ ಜೇಬೊಳಗಿಟ್ಟ. ಕಡಿದಾದ ಕೊಡಲಿಯ ಮೊನೆಯಂತಹ ಹಿಮಬಂಡೆಗಳನ್ನು ದಾಟುತ್ತಾ ಅಧಿಕಾರಿ ಹಾಗೂ ಆತನ ತಂಡ ನಿಶ್ಚಿತ ಗುರಿ ತಲುಪಿದ ಕೂಡಲೇ ಶತ್ರು ಪಡೆಯತ್ತ ಗುಂಡು ಹಾರಿಸತೊಡಗಿದರು. ವೈರಿ ಪಡೆಯ ಬಂಕರ್ ಈ ದಾಳಿಗೆ ಕುಸಿದು ಬಿತ್ತು. ಆದರೆ ಅಷ್ಟರಲ್ಲಿ ಗುಂಡೊಂದು ಎಗರಿ ಬಂದು ಅಧಿಕಾರಿಯ ಎದೆಯನ್ನು ಸೀಳಿತು. ಆತ ಧರಾಶಾಯಿಯಾದ. ನೈನಿತಾಲ್ ನಲ್ಲಿರುವ ಮನೆಗೆ ಅಧಿಕಾರಿಯ ಪಾರ್ಥಿವ ಶರೀರ ತಲುಪಿದ್ದು ಇದಾಗಿ ಒಂದು ವಾರ ನಂತರ. ಉತ್ತರಪ್ರದೇಶ ಗಢವಾಲದಲ್ಲಿರುವ ಪ್ರತಿ ಮೂರನೇ ಮನೆಯಿಂದ ಒಬ್ಬ ಸೈನ್ಯಕ್ಕೆ ಸೇರಿದ್ದಾರೆ. ನೈನಿತಾಲ್ -ನಲ್ಲಿರುವ ಅಧಿಕಾರ...

ಕಾರ್ಗಿಲ್ ಕದನವೀರರು - 8

ಇಮೇಜ್
ಅಮರ್ ದೀಪ್ ಸಿಂಗ್ ಚಿಕ್ಕವನಿದ್ದಾಗ ನೆರೆಮನೆಗೆ ಓಡಿಹೋಗಿ ಟಿವಿ ಪರದೆಯ ಮೇಲೆ ಮೂಡಿಬರುತ್ತಿದ್ದ ಗಣರಾಜ್ಯೋತ್ಸವದ ಸೈನಿಕರ ಆಕರ್ಷಕ ಪಥಸಂಚಲನವನ್ನು ತಪ್ಪದೆ ನೋಡುತ್ತಿದ್ದ. ಸೈನಿಕರ ಹಸಿರು-ಹಳದಿ ಮಿಶ್ರಿತ ಸಮವಸ್ತ್ರ ಆತನ ಮನಸ್ಸನ್ನು ಸೆರೆಹಿಡಿದಿತ್ತು. ಎಷ್ಟರಮಟ್ಟಿಗೆ ಅಂದರೆ ಮೆಟ್ರಿಕ್ ಶಿಕ್ಷಣ ಮುಗಿಯುವ ಮುನ್ನವೇ ಅಮರ್ ದೀಪ್ ಮಿಲಿಟರಿ ಸೇರಿ ಅಂತಹ ಸಮವಸ್ತ್ರವನ್ನು ತೊಟ್ಟಾಗಿತ್ತು. ಮನಸ್ಸಿಗೆ ಅನಿಸಿದ್ದನ್ನು ಕೂಡಲೇ ಕಾರ್ಯಗತಗೊಳಿಸುವುದು ಅಮರ್ ದೀಪ್ ಸ್ವಭಾವ. ಮೇ 8 ರಂದು ಆತ ಮಾಡಿದ್ದೂ ಆದೇ ರೀತಿ. ಹಿಮದ ಕಲ್ಲುಬಂಡೆಗಳ ಕೊರಕಲು ಹಾದಿಯಲ್ಲಿ 14 ಸಹಸ್ರ ಅಡಿಗಳೆತ್ತರದ ಕಾರ್ಗಿಲ್ ಪರ್ವತದಲ್ಲಿ ಹವಲ್ದಾರ್ ಜೈಪ್ರಕಾಶ್ ಜೊತೆ ಆತ ಶತ್ರುಪಡೆಯೊಂದಿಗೆ ನಾಲ್ಕು ಗಂಟೆಗೂ ಮಿಕ್ಕಿ ಅವಿರತವಾಗಿ ಹೋರಾಡಿದ. ಎದೆ, ಹೊಟ್ಟೆಯೊಳಗೆ ಗುಂಡುಗಳು ತೂರಿದವು. ಹವಲ್ದಾರ್ ಜೈಪ್ರಕಾಶ್ ಕೂಡಲೇ ಹಿಂದಕ್ಕೆ ಬರುವಂತೆ ಈತನಿಗೆ ಆದೇಶವಿತ್ತರು. ಅಮರ್ ದೀಪ್ ಅದನ್ನು ಕಿವಿಗೇ ಹಾಕಿಕೊಳ್ಳಲಿಲ್ಲ. ಕದನದಲ್ಲಿ ಆಗಲೇ ಮಡಿದಿದ್ದ ಉಳಿದಿಬ್ಬರ ದೇಹಗಳನ್ನು ಹೇಗಾದರೂ ತರಬೇಕೆಂದು ಮುಂದುವರೆಯುತ್ತಲೇ ಹೋದ. ಎತ್ತರದಲ್ಲಿ ಶತ್ರುಗಳು ಈತ ಕೆಳಗೆ. ಶತ್ರುಗಳ ಗುಂಡುಗಳು ಈತನ ಇಡೀಯ ದೇಹವನ್ನು ಛಿದ್ರ ವಿಚ್ಛಿದ್ರಗೊಳಿಸಿದವು.ಸಂಗಡಿಗರ ಶವವನ್ನು ತರಲಾಗದ ದು:ಖಕ್ಕೆ ಈತನೂ ಶವವಾಗಿ ಹಿಮದೊಡಲಲ್ಲಿ ತಲೆಯಿಟ್ಟು ಮಲಗಿದ. ಅಮರ್ ದೀಪ್ ಕಾರ್ಗಿಲ್ ಯುದ್ದ ಪ್ರಾರಂಭವಾದ ಬಳಿ...

ಕಾರ್ಗಿಲ್ ಕದನವೀರರು - 7

ಇಮೇಜ್
ಆ ದಿನ ಉಷಾಶರ್ಮಾಗೆ ರಾತ್ರಿಯೇ ಎಚ್ಚರವಾಯಿತು. ಅಂದು ಜೂನ್ 9. ಎಚ್ಚರವಾದಾಗ ಏನೋ ತಳಮಳ. ಹೇಳತೀರದ ಸಂಕಟ .ಪಕ್ಕದಲ್ಲಿ ನಿದ್ರಿಸುತ್ತಿದ್ದ ತನ್ನ ಪತಿಯನ್ನು ಎಬ್ಬಿಸಿದಳು. ತಮ್ಮಿಬ್ಬರು ಮಕ್ಕಳ ಬಗ್ಗೆ ರಾತ್ರಿ ಅವರಿಬ್ಬರು ಮಾತನಾಡಿಕೊಂಡರು. ಇಬ್ಬರು ಮಕ್ಕಳು ಮಿಲಿಟರಿಯಲ್ಲಿದ್ದರು ಒಬ್ಬ ಫ್ಲೈಟ್ ಲೆಫ್ಟಿನೆಂಟ್ ಅಮನ್ ಕಾಲಿಯಾ ಇನ್ನೊಬ್ಬ ಚಿಕ್ಕವನು ಕ್ಯಾಪ್ಟನ್ ಅಮೋಲ್ ಕಾಲಿಯಾ. ಇದಾಗಿ ಮೂರು ದಿನಗಳ ನಂತರ ಸ್ಥಳೀಯ ವರ್ತಮಾನ ಪತ್ರಿಕೆಯಲ್ಲಿ ಸುದ್ದಿ ತೇಲಿಬಂತು " ಕಾರ್ಗಿಲ್ ಪರ್ವತ ವಶಪಡಿಸಿಕೊಳ್ಳುವ ಭೀಕರ ಕಾಳಗದಲ್ಲಿ ಭಾರತೀಯ ಕ್ಯಾ. ಅಮೋಲ್ ಕಾಲಿಯಾ. ವೀರ ಸ್ವರ್ಗ ಸೇರಿದ್ದಾರೆ". "ನನ್ನ ಬಗ್ಗೆ ಚಿಂತಿಸಬೇಡಿ ಈ ತಿಂಗಳ ಕೊನೆಗೆ ನಾನು ದೆಹಲಿಗೆ ಹಿಂದಿರುಗುವ ನಿಮಗೆ ತುಂಬಾ ತುರ್ತಾಗಿದ್ದರೆ ಆಗ ನನ್ನ ಮದುವೆಯನ್ನು ನಿರ್ಧರಿಸಬಹುದು." ಅಮೋಲ್ ತಂದೆ-ತಾಯಿಗೆ ಬರೆದ ಈ ಪತ್ರ ತಲುಪಿದ್ದು ಜೂನ್ 9ರಂದು ಅದೇ ದಿನ ಅಮೋಲ್ ತನ್ನ ಜಮ್ಮು-ಕಾಶ್ಮೀರ ಲೈಟ್ ಇನ್ ಫೆಂಟ್ರಿಯ 40 ಉಳಿದ ಸೈನಿಕರೊಂದಿಗೆ ಹದಿನೆಂಟು ಸಹಸ್ರ ಅಡಿ ಎತ್ತರದ ಹಿಮಾಚ್ಛಾದಿತ ಕಾರ್ಗಿಲ್ ಯಲೋಡೀರ್ ಪ್ರದೇಶದಲ್ಲಿ ಶತ್ರು ಪಡೆಯ ವಿರುದ್ಧ ಭೀಕರ ಕದನದಲ್ಲಿ ತೊಡಗಿದ್ದರು. ಪರ್ವತ ಪ್ರದೇಶದ ಯುದ್ಧದಲ್ಲಿ ಪರಿಣಿತರಾದ ಅಮೋಲ್ ಮತ್ತು ಗೆಳೆಯರನ್ನು  ಯುದ್ಧ ವಿಮಾನ  ಹಿಂದಿನ ದಿನವಷ್ಟೇ ಆ ಪ್ರದೇಶಕ್ಕೆ ತಂದಿಳಿಸಿತ್ತು. ಆದರೆ ಪಾಕ್ ಸೈನಿಕರು ಅಲ್ಲಿ ಆಗಲ...

ಭಾರತದ ಸಂಸ್ಕೃತಿಯ ಅನಾವರಣ ಇಂಡೋನೇಷ್ಯಾ ನೆಲದಲ್ಲಿ

ಇಮೇಜ್
ದೂರದ ಇಂಡೋನೇಷ್ಯಾ ಒಮ್ಮೆ ನೋಡಿದಾಗ ಹಿಂದು ಸಂಸ್ಕೃತಿ ಪರಂಪರೆಯ ಅನೇಕ ಕುರುಹುಗಳು ಇಂದಿಗೂ ಕಂಡುಬರುತ್ತದೆ. ಇಂಡೋನೇಷ್ಯಾದಲ್ಲಿ 15 ಕ್ಕೂ ಮಿಕ್ಕಿ ಗಣೇಶನ ವಿಗ್ರಹವನ್ನು ನೋಡಬಹುದು ಕೆಲವು ಕಡೆ ವಿಗ್ರಹಗಳ ಅವಶೇಷಗಳು ಮಾತ್ರ ಮ್ಯೂಸಿಯಂನಲ್ಲಿ ಕಾಣಸಿಗುತ್ತವೆ. ಅಷ್ಟೇ ಅಲ್ಲ ಅಲ್ಲಿಯ ಅನೇಕ ಬೌದ್ಧ ದೇವಾಲಯದಲ್ಲೂ ವಿಷ್ಣುವಿನ ವಾಹನ ಗರುಡನನ್ನು ಕಾಣಬಹುದು.  ಇಂಡೋನೇಷ್ಯಾದಲ್ಲಿ ಸಂಸ್ಕೃತ ಭಾಷೆಯು ಸಮೃದ್ಧವಾಗಿ ಅವರ ಭಾಷೆಯಲ್ಲಿ ಕಂಡುಬರುತ್ತದೆ ಉದಾಹರಣೆಗೆ ಸಂಸ್ಕೃತ ಮತ್ತು ಇಂಡೋನೇಷಿಯನ್ ಎರಡರಲ್ಲೂ ಗಜಾ ಮತ್ತು ಗಜಾ, ಎರಡೂ ಆನೆ ಎಂದರ್ಥ. ಇಂಡೋನೇಷ್ಯಾದಲ್ಲಿ ಜೆಂಟಾ ಮತ್ತು ಸಂಸ್ಕೃತದಲ್ಲಿ ಘಂಟಾ ಎಂದು ಹೇಳುತ್ತಾರೆ ಅಷ್ಟೇ ಅಲ್ಲ ಗ್ರೆಹಣ ಎಂದು ಇಂಡೋನೇಷಿಯನ್ ಮತ್ತು ಗ್ರಹಣ ಸಂಸ್ಕೃತದಲ್ಲಿ ಹೇಳುತ್ತಾರೆ. ಮತ್ತು ಇಂಡೋನೇಷ್ಯಾ ಮತ್ತು ಸಂಸ್ಕೃತ ಎರಡರಲ್ಲೂ ಗ್ರಹ - ಮನೆ ಅಥವಾ ಮಹಲು, ಸಂಸ್ಕೃತ ಮತ್ತು ಇಂಡೋನೇಷಿಯನ್ ಎರಡರಲ್ಲೂ ಗುರು ಎಂದರೆ ಶಿಕ್ಷಕ, ಸಂಸ್ಕೃತ ಮತ್ತು ಇಂಡೋನೇಷಿಯನ್ ಎರಡರಲ್ಲೂ ಹಸ್ತ - ಕೈ ಹಾಗೂ Husada ಅಥವಾ Usada ಇಂಡೋನೇಶಿಯನ್ ಮತ್ತು Aushadha ಸಂಸ್ಕೃತದಲ್ಲಿ ಅರ್ಥ ಮೆಡಿಸಿನ್ ಇಂಡೋನೇಷ್ಯಾದಲ್ಲಿ ಇಂದ್ರ ಮತ್ತು ಸಂಸ್ಕೃತದಲ್ಲಿ ಇಂದ್ರಿಯಾ - ಇಂದ್ರಿಯ ಅಂಗ. ಇಂಡೋನೇಷ್ಯಾ ಮತ್ತು ಸಂಸ್ಕೃತ ಎರಡರಲ್ಲೂ ಇಸ್ತೇರಿ ಅಥವಾ ಇಸ್ಟ್ರಿ ಮತ್ತು ಸ್ಟ್ರೈ ಎಂದರೆ ಮಹಿಳೆ.ಎರಡೂ ಭಾಷೆಗಳಲ್ಲಿ ಜಗತ್ ಎಂದರೆ ಯೂ...

ಕಾರ್ಗಿಲ್ ಕದನವೀರರು - 6

ಇಮೇಜ್
"ನಾನು ಗುರುತು ಪರಿಚಯವಿರದ, ಇದುವರೆಗೆ ಕಂಡು ಕೇಳರಿಯದ ದೂರದ ಪ್ರದೇಶಕ್ಕೆ ಹೋಗುತ್ತಿರುವೆ. ಇದೊಂದು ಅಪಾಯಕಾರಿ ಸಾಹಸವೇ ಆಗಬಹುದು" ಲೆಫ್ಟಿನೆಂಟ್ ಕರ್ನಲ್ ಆರ್.ವಿಶ್ವನಾಥನ್ ಪತ್ನಿ ಜಲಜಾಳಿಗೆ ಜೂನ್ 2ರಂದು ಒಂದು ಪತ್ರ ಬರೆದರು. ಆ ಪತ್ರವೇನೋ ಪತ್ನಿಗೆ ತಲುಪಿತು. ಆದರೆ ಪತ್ರ ತಲುಪಿದ ದಿನವೇ ಪತಿಯ ಪಾರ್ಥಿವಶರೀರವೂ ಮನೆಗೆ ಬಂದಿಳಿಯಿತು. ವಿಶ್ವನಾಥನ್ ಅವರ ಮೂವರು ಸಂಗಡಿಗರು ತೊಲೊಲಿಂಗ್ ನ ಹಿಮಾಚ್ಛಾದಿತ ಪರ್ವತಪ್ರದೇಶದಲ್ಲಿ ಹೋರಾಡುತ್ತಾ ಮಡಿದಿದ್ದರು. ಅವರ ದೇಹಗಳನ್ನು ಅಲ್ಲಿಂದ ಕೆಳಕ್ಕೆ ಹೇಗಾದರೂ ಒಯ್ಯಬೇಕೆಂದು ವಿಶ್ವನಾಥನ್ ಹೊರಟಿದ್ದರು. ಒಬ್ಬ ಸೈನ್ಯಾಧಿಕಾರಿಯಾಗಿ ಇಷ್ಟನ್ನಾದರೂ ಮಾಡದಿದ್ದರೆ ಹೇಗೆ ? ಜೂನ್ 2ರಂದು ಕಾರಿರುಳ ರಾತ್ರಿ ವಿಶ್ವನಾಥ ತನ್ನ ಪಡೆಯೊಂದಿಗೆ ಹೊರಟರು. 18 ಗ್ರೆನೆಡಿಯರ್ಸ್ ಪಡೆ ವಿಶ್ವನಾಥನ್ ಜೊತೆ ಹೊರಟಿತು. ಮತ್ತೆ ಅದೇ ಕಥೆ ಪರ್ವತದೆತ್ತರದಲ್ಲಿ ಬಂಕರ್ ಗಳಲ್ಲಿ ಅಡಗಿಕೊಂಡ ಶತ್ರು ಪಡೆ ಕೆಳಗೆ ಕಣಿವೆಯಲ್ಲಿ ಮೇಲೇರುತ್ತಿರುವ ಭಾರತೀಯ ಸೇನೆ. ಏನಾಗಿರಬಹುದೆಂದು ಹೇಳುವ ಅಗತ್ಯವೇ ಇಲ್ಲ. ಶತ್ರು ಪಡೆಯು ಎಲ್ ಎಂಜಿ ಮೇಶಿನ್ ಗನ್ ಮೂಲಕ ಒಂದೇ ಸಮನೆ ಗುಂಡಿನ ಮೊರೆತ. ಆದರೆ ಇದನ್ನೆಲ್ಲ ವಿಶ್ವನಾಥನ್ ಲೆಕ್ಕಿಸಲಿಲ್ಲ. ಶತ್ರುಪಡೆಯ ಗುಂಡುಗಳು ಅವರ ತೊಡೆ, ತೊಡೆಸಂದಿಗಳನ್ನು ಸೀಳಿದವು. ತೀವ್ರ ವೇದನೆಯಿಂದ ಚಡಪಡಿಸುತ್ತಿದ್ದ ವಿಶ್ವನಾಥನ್ ಅವರನ್ನು ಸಂಗಡಿಗ ಸೈನಿಕರು ದ್ರಾಸ್ ಪ್ರದೇಶದ ಮಿಲ...

ಕಾರ್ಗಿಲ್ ಕದನವೀರರು - 5

ಇಮೇಜ್
"ನೀನೇನೂ ಹೆದರಬೇಕಾಗಿಲ್ಲ ನಾನು ಕಾಶ್ಮೀರದಲ್ಲಿ ಮೂರು ವರ್ಷಗಳ ಕಾಲ ಉಗ್ರಗಾಮಿಗಳ ವಿರುದ್ಧ ಹೋರಾಡಿರುವೆ" ಸೈನಿಕ ಸಮವಸ್ತ್ರದ ತೋಳು ಮಡಚುತ್ತ ಕಂಬನಿ ತುಂಬಿದ ತನ್ನ 20 ರ ಹರೆಯದ ಪತ್ನಿ ಗುರುದಯಾಲ್ ಕೌರ್ ಗೆ ಸಿಪಾಯಿ ಜಸ್ ವಿಂದರ್ ಸಿಂಗ್ ಬೆಚ್ಚನೆಯ ಭರವಸೆಯ ಇತ್ತ ಆತ ಪಾಕ್ ಪಡೆಗಳನ್ನು ಬಲಿ ತೆಗೆದುಕೊಳ್ಳಲು ಕಾರ್ಗಿಲ್ ಯುದ್ಧ ಭೂಮಿಗೆ ಹೊರಟಿದ್ದ. ಕೌರ್ ಜಸ್ ವಿಂದರ್ ಸಿಂಗ್ ವಿವಾಹವಾಗಿ ಇನ್ನೂ ನಾಲ್ಕು ತಿಂಗಳು ಕಳೆದಿತ್ತಷ್ಟೇ. ಕಂಗಳ ತುಂಬಾ ಮನದ ತುಂಬಾ ಅದೇನೇನೋ ದಾಂಪತ್ಯ ಜೀವನದ ಹೊಂಗನಸುಗಳನ್ನು ತುಂಬಿಕೊಂಡಿದ್ದಳು. ಯುದ್ಧ ಮುಗಿದು ಪತಿ ಮನೆಗೆ ಮರಳಿದರೆ ಸಾಕು ತಾನು ಕಟ್ಟಿಕೊಂಡ ಒಂದಿಷ್ಟು ಕನಸುಗಳಾದರೂ ನನಸಾಗಬಹುದೆಂದು ಎಂದು ಲೆಕ್ಕಾಚಾರ ಹಾಕಿದ್ದುಳು. ಗುರುದಯಾಲ್ ಕೌರ್ ತನ್ನ ಪತಿ ಜಸ್ ವಿಂದರ್ ಸಿಂಗ್ ನನ್ನು ಮದುವೆಯಲ್ಲಿ ನೋಡಿದ್ದೆಷ್ಟೋ ಅಷ್ಟೇ. ಅದೇ ಆಕೆಯ ದಾಂಪತ್ಯ  ಬದುಕಿನ ಅಮೃತಘಳಿಗೆಗಳು. ಅನಂತರ ಆ ಅಮೃತಘಳಿಗೆಗಳು ಆಕೆಯ ಬಾಳಿನಲ್ಲಿ ಮತ್ತೆಂದೂ ಬರಲಿಲ್ಲ. ಜಸ್ ವಿಂದರ್ ಸಿಂಗ್ ಪ್ಲೈವುಡ್ ಪೆಟ್ಟಿಗೆಯೊಂದರಲ್ಲಿ ಹೆಣವಾಗಿ ಮನೆಯಂಗಳಕ್ಕೆ ಬಂದಿಳಿದಾಗ ಆಕೆ ಆ ಕ್ರೂರ ಸತ್ಯವನ್ನು ಎದುರಿಸಬೇಕಾಯಿತು. ಜಸ್ ವಿಂದರ್ ಸಿಂಗ್ ತಂದೆ ಜೋಗಿಂದರ್ ಸಿಂಗ್ ಪಂಜಾಬಿನ ಒಬ್ಬ ಅಂಧ ರೈತ. ಮೂರು ಎಕರೆ ಜಮೀನು ಹೊಂದಿರುವ ಆತನಿಗೆ ಮೂವರು ಗಂಡುಮಕ್ಕಳು. ಈ ಜಮೀನು ಮೂವರು ಮಕ್ಕಳ ಬದುಕಿಗೆ ಏನೇನೂ ಸಾಲದೆಂದು ನಿರ್ಧರಿಸಿ...

ಕಾರ್ಗಿಲ್ ಕದನವೀರರು - 4

ಇಮೇಜ್
ಕಾರ್ಗಿಲ್ ಕದನದ ಹಿಂದೆ ಅನೇಕ ರೋಚಕ ಘಟನೆಗಳಿವೆ ಸಾಹಸದ ಕಥೆಗಳಿವೆ ಶೌರ್ಯಕ್ಕೆ ಜೀವಂತ ಉದಾಹರಣೆಗಳಿವೆ. ಪ್ರತಿಯೊಬ್ಬ ಯೋಧರ ವೀರಗಾಥೆ ಕಣ್ಣಲ್ಲಿ ನೀರ ಹನಿಗಳನ್ನು ತುಂಬುತ್ತವೆ. ಇಂತಹ ಸಾವಿರಾರು ಯೋಧರ ಬಲಿದಾನವೇ ಈ ಇಂದು ಹೆಮ್ಮ ಪಡುವ ಕಾರ್ಗಿಲ್ ವಿಜಯ ದಿನಕ್ಕೆ ಕಾರಣ ಎಂಬುದು ಮರೆಯುವಂತಿಲ್ಲ.  "ಏಕ್ ಪಲ್ ಮೇ ಹೈ ಸಚ್ ಸಾರೀ ಜಿಂದಗೀ ಕಾ. ಇಸ್ ಪಲ್ ಮೇ ಜೀ ಲೋ ಯಾರನ್ , ಯಹಾಂ ಕಲ್ ಹೈ ಕಿಸನೇ ದೇಖಾ"   ಕ್ಯಾಪ್ಟನ್ ಹನೀಫ್ ಉದ್ದೀನ್ ಆಗಾಗ ಗುನುಗುನಿಸುತ್ತಿದ್ದ ಹಾಡಿದು. ಈ ಹಾಡನ್ನು  ಬರೆದಿದ್ದು ಹನೀಫ್ ಸಹೋದರ ಸಮೀರ್. ಹನೀಫ್ ತನ್ನ ಸೈನಿಕ ಗೆಳೆಯರಿಗಾಗಿ ಈ ಹಾಡನ್ನು ಆಗಾಗ ರಾಗವಾಗಿ ಹೇಳುತ್ತಿದ್ದ. 'ಹಾಡು ಹೇಳುವ ಯೋಧ' ಎಂದೇ ಆತ ಎಲ್ಲಾರಿಗೂ ಚಿರಪರಿಚಿತ. ಕಗ್ಗಲ್ಲಿನ ಹಿಮಬಂಡೆಗಳನ್ನು ತುಳಿಯುತ್ತ, ಬೀಸುವ ಬಿರುಗಾಳಿ ಸಹಿಸುತ್ತ ಶತ್ರುಪಾಳೆಯದತ್ತ ಮುನ್ನಡೆಯಬೇಕಾದ ಕಷ್ಟಕರ ಅಸಹನೀಯ ಕ್ಷಣಗಳಲ್ಲಿ ಆತನ ಗೆಳೆಯರಿಗೆ ಹನೀಫ್ ನ ಸುಶ್ರಾವ್ಯ ಧ್ವನಿಯಿಂದ ಹರಿದು ಬರುತ್ತಿದ್ದ ಹಾಡೇ ಪ್ರೇರಣಾಸೂತ್ರ. ಮರುಭೂಮಿಯಲ್ಲೊಂದು ಓಯಸಿಸ್ ದೊರಕಿದಂತೆ. ಮನೆಯಲ್ಲಿ  ಆರಾಮವಾಗಿ ಕುಳಿತು ಟಿವಿ ನೋಡಿದಾಗ ಉಂಟಾಗುವ ಸಂತಸ ಈ ಹಾಡು ಕೇಳಿದಾಗ ಸೈನಿಕರಿಗೆ ಆಗುತ್ತಿತ್ತು. 'ರಣರಂಗದಲ್ಲಿರಲಿ, ಮಿಲಿಟರಿ ಕ್ಯಾಂಪ್ ಗಳಲ್ಲಿರಲಿ ಹನೀಫ್ ಹಾಡುಗಳಿಗೆ ಅಡೆತಡೆಯೇ ಇರಲಿಲ್ಲ. ಹಾಸ್ಯ , ವಿನೋದ , ಹಾಡು ಹಾಗೂ ಪರಾಕ್ರಮ ಆತನ ಜೀವನ...